ಬೆಂಗಳೂರು, ಬಳ್ಳಾರಿ ಹಾಗೂ ಹೈದರಾಬಾದ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡಗಳು, ಗುರುವಾರ ರಾತ್ರಿ ಬರಿಗೈಲಿ ನಗರಕ್ಕೆ ಮರಳಿದವು. ರೆಡ್ಡಿ ಶುಕ್ರವಾರ ಅಧಿಕೃತವಾಗಿ ಕಾನೂನು ಹೋರಾಟಕ್ಕಿಳಿದ ಕೂಡಲೇ, ಪೊಲೀಸರು ಅವರ ಆಪ್ತರ ಮೊಬೈಲ್ ಕರೆಗಳ ಜಾಡು ಹಿಡಿದು ಪುನಃ ಶೋಧ ಪ್ರಾರಂಭಿಸಿದ್ದಾರೆ. ಎರಡು ಹೆಚ್ಚುವರಿ ತಂಡಗಳು ಶನಿವಾರ ಹೈದರಾಬಾದ್ಗೆ ತೆರಳಲಿವೆ.