"ಕೇಂದ್ರ ಗೃಹ ಸಚಿವಾಲಯ ಮಾರ್ಚ್ 10ರಂದು ಹೊರಡಿಸಿದ ಮಾರ್ಗಸೂಚಿ ಅನ್ವಯ ಧಾರ್ಮಿಕ ಸಭೆ, ಸಮಾರಂಭ ಹಾಗೂ ಜನಸಂದಣಿಯನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಲಾಗಿದೆ. ಲಾಕ್ಡೌನ್ ಉಲ್ಲಂಘನೆ ಪ್ರಕರಣಗಳ ವಿಚಾರದಲ್ಲಿ ರಾಜ್ಯ ಸರ್ಕಾರ ‘ಶೂನ್ಯ ಸಹನೆ’ (ಝಿರೋ ಟಾಲರೆನ್ಸ್) ಹೊಂದಿರಬೇಕು. ಈ ಆದೇಶ ಜಾರಿಗೆ ಸ್ಥಳೀಯ ಪೊಲೀಸರಿಗೆ ಅನುಕೂಲವಾಗುವಂತೆ ಸುತ್ತೋಲೆ ಹೊರಡಿಸಿ" ಎಂದು ಸರ್ಕಾರ ಹಾಗೂ ಡಿಜಿಪಿಗೆ ಹೈಕೋರ್ಟ್ ಇದೇ 9ರಂದು ಆದೇಶಿಸಿತ್ತು.