‘ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವುದು, ಒತ್ತಡ ನಿಯಂತ್ರಣ, ಉತ್ತಮ ಆರೋಗ್ಯ ಕಾಪಾಡುವುದು, ಗಾಳಿಯ ಗುಣಮಟ್ಟ ಸುಧಾರಣೆಗಾಗಿ ಬೈಸಿಕಲ್ ಬಳಸೋಣ’ ಎಂಬುದು ಈ ಅಭಿಯಾನದ ಧ್ಯೇಯ ವಾಕ್ಯ. ಸೈಕ್ಲಿಸ್ಟ್ ಮತ್ತು ಬೈಸಿಕಲ್ ಮೇಯರ್ ಎಂದೇ ಖ್ಯಾತರಾಗಿರುವ ಸತ್ಯ ಶಂಕರನ್,ಡಾ.ಅರವಿಂದ್ ಭತೇಜಾ ನೇತೃತ್ವದಲ್ಲಿ ಈ ಅಭಿಯಾನ ಆರಂಭವಾಗಿದ್ದು,ಆಸಕ್ತ ಸೈಕ್ಲಿಸ್ಟ್ಗಳೂ ಕೈ ಜೋಡಿಸಿದ್ದಾರೆ. ಈ ತಂಡದ ಸದಸ್ಯರು, ‘ನಿತ್ಯದ ಅಗತ್ಯಗಳಿಗೆ ಸೈಕಲ್‘ಬಳಸಿ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈವಿಷಯವನ್ನು ಜಾಲತಾಣಗಳ ಮೂಲಕವೂ ಹಂಚುತ್ತಿದ್ದಾರೆ. ‘ಅಷ್ಟೇ ಅಲ್ಲ, ಸೈಕಲ್ ಬಳಕೆಗೆ ಆದ್ಯತೆ ನೀಡಿ, ಪ್ರೋತ್ಸಾಹ ನೀಡಬೇಕು‘ ಎಂದು ಸರ್ಕಾರ ಹಾಗೂ ನಗರ ಪೊಲೀಸ್ ಆಯುಕ್ತರಿಗೂ ಪತ್ರದ ಮೂಲಕ ಮನವಿ ಮಾಡಿದ್ದಾರೆ.