‘ಶಾಸಕಾಂಗದಷ್ಟೇಮಾಧ್ಯಮ ಕ್ಷೇತ್ರವೂ ಮುಖ್ಯ. ಸ್ಪೀಕರ್ಗಳ ಸಮ್ಮೇಳನದಲ್ಲಿ ನಿರ್ಬಂಧದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಸದನದಲ್ಲಿ ನಿರ್ಬಂಧ ವಿಧಿಸಬೇಕೆ ಬೇಡವೇ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಇಲ್ಲಿ ನಡೆಯುವ ಚರ್ಚೆಗಳು ಎಲ್ಲ ಜನರಿಗೂ ಗೊತ್ತಾಗಬೇಕು. ಎಲ್ಲ ಜನರೂ ದಿನ ಪತ್ರಿಕೆಗಳನ್ನು ಓದುವುದಿಲ್ಲ. ಆದರೆ, ಸುದ್ದಿವಾಹಿನಿಗಳು ಎಲ್ಲ ಜನರನ್ನು ತಲುಪುವ ಪ್ರಭಾವಿ ಮಾಧ್ಯಮವಾಗಿದ್ದು, ಅವುಗಳಿಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ’ ಎಂದರು.