ಪಿಲಿಕುಳ ನಿಸರ್ಗಧಾಮದ ಪುಟ್ಟ ಕಾಡಿನೊಳಗೆ ‘ಒಂದು ಹುಲಿ ಮತ್ತೊಂದು ಹುಲಿಯ ಕಿವಿಹಿಂಡಿ ಎಳೆಯುತ್ತಿರುವ ಚಿನ್ನಾಟದ ದೃಶ್ಯ ಸೆರೆ ಹಿಡಿದ ಮೈಸೂರಿನ ಕರಣ್ ಸತೀಶ್ ಅವರಿಗೆ ದ್ವಿತೀಯ ಸ್ಥಾನ ಹಾಗೂ ‘ಆಹಾರಕ್ಕೆ ದೃಷ್ಟಿನೆಟ್ಟು ರೆಕ್ಕೆ ಬಿಚ್ಚಿ ಹಾರಾಡುತ್ತಿರುವ ಗಿಳಿ’ಯ ಚಿತ್ರ ಸೆರೆಹಿಡಿದ ತುಮಕೂರಿನ ವರದನಾಯಕ ಟಿ. ಪಿ. ತೃತೀಯ ಬಹುಮಾನ ಪಡೆದಿದ್ದಾರೆ.