ಬೆಂಗಳೂರು: ‘ನಿಮಗೆ ಏನು ತೊಂದರೆ ಇದೆ ಹೇಳಿ, ಎಲ್ಲಿ ನೋವಿದೆ, ಈಗ ಹಸಿವು ಆಗುತ್ತಿದೆಯೇ...’ ಉತ್ತರ ಭಾರತದ ಯುವ ವೈದ್ಯರು ಹಳ್ಳಿಗೆ ಬಂದು ಕನ್ನಡದಲ್ಲಿ ಹೀಗೆ ಕೇಳಿದಾಗ ನಮಗೆ ಎಷ್ಟು ಖುಷಿಯಾಗುವುದಿಲ್ಲ ಹೇಳಿ. ಅರ್ಧ ಕಾಯಿಲೆ ಆಗಲೇ ಹೊರಟು ಹೋಗುತ್ತದೆ. ಇದು ಕಲ್ಪನೆಯಲ್ಲ, ಇನ್ನು ಮುಂದೆ ಅದು ವಾಸ್ತವ ಸಂಗತಿಯಾಗಲಿದೆ!