ಆರ್.ಶಂಕರ್ ಅವರು ಕುರುಬ ಸಮಾಜದವರಾಗಿದ್ದು, ಈಶ್ವರಪ್ಪ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಜತೆಗೆ ಕಾಗಿನೆಲೆ ಸಂಸ್ಥಾನವೂ ಸಮೀಪವಿದೆ. ಜತೆಗೆ, ಈಶ್ವರಪ್ಪ ಅವರ ಸಹಕಾರದೊಂದಿಗೆ ಶಂಕರ್ ಕುರುಬ ಸಮಾಜದ ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ಆದ್ದರಿಂದ, ಅವರು ಸಹಜವಾಗಿ ಈಶ್ವರಪ್ಪ ಅವರ ಕರೆಯಂತೆ ಅವರ ಪುತ್ರನ ಜತೆ ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.