ಮೂವರು ಆರೋಪಿಗಳು, ಐಎಸ್ ಸಂಘಟನೆಯ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮೊದಲು ಕೇರಳ ಮತ್ತು ಕರ್ನಾಟಕದ ಕೆಲವು ಆರ್ಎಸ್ಎಸ್ ನಾಯಕರನ್ನು ಹತ್ಯೆ ಮಾಡಲು ಈ ಮೂವರು ಶಾರ್ಪ್ ಶೂಟರ್ಗಳಿಗೆ ಐಎಸ್ ಸುಪಾರಿ ನೀಡಿದ್ದು, ಇದಕ್ಕಾಗಿ ₹2 ಕೋಟಿ ಪಡೆದಿದ್ದರು ಎನ್ನಲಾಗಿದೆ. ತನ್ನ ಸಹಚರರು ದೆಹಲಿಯಲ್ಲಿ ಬಂಧನಕ್ಕೆ ಒಳಗಾದ ಮಾಹಿತಿ ಲಭಿಸಿದ ತಸ್ಲೀಂ, ತನಗೆ ಸುರಕ್ಷಿತ ಸ್ಥಳವಾಗಿದ್ದ ಚಟ್ಟಂಚಾಲಿನಲ್ಲಿ ಅಡಗಿದ್ದ.