‘ಅಪಘಾತದ ಸ್ಥಳದಲ್ಲೇ ಮಂಜುನಾಥ್ ಅವರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದಾಗ, ಯಾವುದೇ ಮದ್ಯದ ಅಂಶ ಕಂಡುಬಂದಿರಲಿಲ್ಲ. ಅಷ್ಟಾದರೂ ಮಾಧ್ಯಮದವರು, ‘ಪಾನಮತ್ತರಾಗಿ ಕಾರು ಓಡಿಸಿದ್ದರು’ ಎಂದು ತಪ್ಪಾಗಿ ಸುದ್ದಿ ಮಾಡಿದ್ದರು. ಅದರಿಂದ ನೊಂದಿದ್ದ ಮಂಜುನಾಥ್, ನನಗೂ ಕರೆ ಮಾಡಿ ಅಳಲು ತೋಡಿಕೊಂಡಿದ್ದರು’ ಎಂದು ಹೇಳಿದರು.