ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿ, ‘ಅನುದಾನವನ್ನು ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದರು. ಹಾಲಾಡಿ ಶ್ರೀನಿವಾಸ ಶೆಟ್ಟಿ, ‘2013–14ರಲ್ಲಿ ಅನುದಾನವನ್ನು ₹2 ಕೋಟಿಗೆ ಏರಿಸಲಾಗಿತ್ತು. ಆಗ ಸಿಮೆಂಟ್ ಚೀಲದ ಬೆಲೆ ₹180, ಮರಳಿನ ದರ ₹3 ಸಾವಿರ, ಜಲ್ಲಿ ದರ ₹3.5 ಸಾವಿರ ಇತ್ತು. ಈಗ ದರ ದುಪ್ಪಟ್ಟಾಗಿದೆ. ನಿಧಿಯ ಮೊತ್ತವನ್ನು ₹5 ಕೋಟಿಗೆ ಏರಿಸಬೇಕು‘ ಎಂದು ಆಗ್ರಹಿಸಿದರು.