ಬಳ್ಳಾರಿ:ಆಫ್ರಿಕಾದ ರುವಾಂಡ ದೇಶದ ಹೈಕಮಿಷನರ್ ಅರ್ನೆಸ್ಟ್ ರಾಮಿಕೋ ಅವರು ನಗರದಲ್ಲಿ ಸೋಮವಾರ ರಾತ್ರಿ ಜಿಲ್ಲೆಯ ಉದ್ಯಮಿಗಳೊಂದಿಗೆಸಭೆ ನಡೆಸಿ, ತಮ್ಮ ದೇಶದಲ್ಲಿ ಬಂಡವಾಳ ಹೂಡುವಂತೆ ಮನವಿ ಮಾಡಿದರು.
ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಜಿಲ್ಲೆಯ ಹದಿನೈದು ಮಂದಿ ಬಂಡವಾಳ ಹೂಡಲು ಸಿದ್ಧರಿರುವುದು ಸ್ವಾಗತಾರ್ಹ ವಿಚಾರ’ ಎಂದರು.
‘ಭಾರತದ ಮೆಟ್ರೋಪಾಲಿಟನ್ ನಗರಗಳಲ್ಲಿ ಮಾತ್ರ ನಾವು ಉದ್ಯಮಿಗಳನ್ನು ಭೇಟಿ ಮಾಡುತ್ತಿತ್ತು. ಈಗ ಬಳ್ಳಾರಿಯಂಥ ನಗರಗಳಿಗೂ ಭೇಟಿ ಮಾಡಿ ಉದ್ಯಮಿಗಳನ್ನು ಸೆಳೆಯಲು ಉದ್ದೇಶಿಸಿದೆ’ ಎಂದರು.