‘ಹಿಂದಿನ ಕಾಲದಲ್ಲಿ ನಾರಿಯರ ಅನುಭವಗಳು ಮನೆಗೆ ಸೀಮಿತವಾಗಿದ್ದವು. ಆ ಸೀಮಿತ ವ್ಯಾಪ್ತಿಯಲ್ಲೇ ಅವರು ಸಾಹಿತ್ಯ ರಚಿಸುತ್ತಿದ್ದರು. ಈಗ ಅನುಭವವೂ ಹೆಚ್ಚಾಗಿದೆ. ಕನ್ನಡ ಸಾಹಿತ್ಯ ಸಮೃದ್ಧವಾಗಿದೆ. ಲೇಖಕಿಯರೂ ಹೆಚ್ಚಾಗಿದ್ದಾರೆ. ಸ್ಪರ್ಧೆಯೂ ಹೆಚ್ಚಿದೆ. ಹೀಗಾಗಿ, ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸುವ ಅಗತ್ಯ ಇದೆ. ಮಹಿಳೆಯರಿಗೆ ಅವರದ್ದೇ ಆದ ಗೊಂದಲ, ಆತಂಕ, ಶಕ್ತಿ, ತಾಕಲಾಟಗಳು ಇರುತ್ತವೆ. ವಿಚಾರ ವಿನಿಮಯ, ಮಹಿಳಾ ವಿಷಯಗಳ ಬಗ್ಗೆ ಇಂಥ ವೇದಿಕೆಗಳಲ್ಲಿ ಚರ್ಚಿಸಲು ಅನುಕೂಲವಾಗುತ್ತದೆ’ ಎಂದರು.