ನವದೆಹಲಿ: ಸಾಹಿತಿ ಶ್ರೀಧರ ಬನವಾಸಿ ಜಿ.ಸಿ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ 2019ನೇ ಸಾಲಿನ ‘ಯುವ ಪುರಸ್ಕಾರ’ಕ್ಕೆ ಮತ್ತು ಲೇಖಕ ಚಂದ್ರಕಾಂತ ಕರದಳ್ಳಿ ಅವರು ‘ಬಾಲ ಸಾಹಿತ್ಯ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ.
ಶ್ರೀಧರ ಬನವಾಸಿ ಅವರ ಕಾದಂಬರಿ ‘ಬೇರು’ ಹಾಗೂ ಕರದಳ್ಳಿ ಅವರ ಕಾದಂಬರಿ ‘ಕಾಡು ಕನಸಿನ ಬೀಡಿಗೆ’ ಕೃತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.