‘ಮರಳು ಅಕ್ರಮ ಸಾಗಣೆಯಿಂದ ಕೆರೆ ಪಾತ್ರ, ನದಿ ದಂಡೆ ಸಂಪೂರ್ಣ ಬರಿದಾಗಿದೆ. ಶಿರಾ, ಹೊಸದುರ್ಗ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪಾಪದಲ್ಲಿ ರಾಜಕೀಯ ಮಾಡುತ್ತಿದ್ದೀರಿ. ತಕ್ಷಣ ಕ್ರಮ ತೆಗೆದುಕೊಳ್ಳಿ’ ಎಂದು ಸರ್ಕಾರದ ವಿರುದ್ಧ ಬಿಜೆಪಿಯ ಮಾಧುಸ್ವಾಮಿ ಆಗ್ರಹಿಸಿದರು. ಅಕ್ರಮ ಮರಳು ಸಾಗಣೆದಾರರು ಉಡುಪಿಯಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ ಘಟನೆಯನ್ನು ಕೆ.ಎಸ್. ಈಶ್ವರಪ್ಪ ನೆನಪಿಸಿದರು.