‘ಬಾಗೂರು ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹ ಸ್ಥಳಕ್ಕೆ ಹೋಗಿ ಚಿತ್ರ ಸೆರೆಹಿಡಿಯುತ್ತಿದ್ದೆ.ಇದನ್ನು ಗಮನಿಸಿದ ಮರಳು ದಂಧೆಕೋರರು ನನ್ನಮೇಲೆ ಮನ ಬಂದಂತೆ ಹಲ್ಲೆ ಮಾಡಿದರು. ಆನಂತರ ಚಿಂಚೋಡಿ, ತಿಂಥಣಿ ಬ್ರಿಜ್, ಸುರಪುರ ಸಮೀಪ ತಿಮ್ಮಾಪುರ,ಶಹಾಪುರ, ಯಾದಗಿರಿ, ಸೈದಾಪುರ, ರಾಯಚೂರಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಹಲ್ಲೆ ನಡೆಸಿದರು’ ಎಂದು ಅವರುದೂರಿನಲ್ಲಿ ತಿಳಿಸಿದ್ದಾರೆ.