‘ಶಿವರಾಮ ಕಾರಂತ, ಎಂ.ಕೆ. ಇಂದಿರಾ ಸೇರಿದಂತೆ ಎಲ್ಲ ಸಾಹಿತಿಗಳ ಕೃತಿಗಳನ್ನು ನಾನು ಓದಿದ್ದೇನೆ. ಬದುಕಿನಲ್ಲಿ ಗುರಿಯಿಲ್ಲದೆ ಬೆಳೆದ ನನ್ನಲ್ಲಿ ಆ ಕೃತಿಗಳು ಸಾಹಿತ್ಯಾಸಕ್ತಿ ಕೆರಳಿಸಿದವು. ನಾನು ಎಂದೂ ಬರೆಯುತ್ತೇನೆ, ಮುಂದಿನ ದಿನಗಳಲ್ಲಿ ಸಾಹಿತಿಯಾಗುತ್ತೇನೆ, ಪತ್ರಕರ್ತೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಹೀಗಾಗಿಯೇ ನನ್ನದು ಸಾಧನೆ ಎಂದು ಭಾವಿಸುವುದಿಲ್ಲ’ ಎಂದರು.