ಶಾಸಕ ದತ್ತಾತ್ರೇಯ ಪಾಟೀಲ ಅವರ ಜನ್ಮದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದ ಸ್ವಾಮೀಜಿ, ‘ನಾನೇನು ಸರ್ಕಾರ ಬೀಳಿಸುವ ಉದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಉಳಿಯಬೇಕಲ್ಲವೇ? ಈ ಮೂರು ವರ್ಷ ಮಾತ್ರವಲ್ಲ; ಮುಂದಿನ ಐದು ವರ್ಷ ಕೂಡ ಅವರೇ ಸರ್ಕಾರ ನಡೆಸಬೇಕಲ್ಲವೇ? ಅದಕ್ಕಾಗಿ ಹೇಳುತ್ತಿದ್ದೇನೆ’ ಎಂದರು.