ಕೌಟುಂಬಿಕ ಸಂಬಂಧವನ್ನು ಕಾನೂನು ರೂಪಿಸಿಲ್ಲ. ಪರಸ್ಪರ ಭಿನ್ನತೆ ನಡುವೆ ಏಕತೆ ಇರುತ್ತದೆ. ಅದೇ ರೀತಿ ದೇಶವೂ ಒಂದು ಕುಟುಂಬ. ಆದರೆ, ರಾಷ್ಟ್ರ ಹಾಗೂ ರಾಷ್ಟ್ರೀಯತೆಗೆ ವ್ಯತ್ಯಾಸವಿದೆ. ಒಂದು ದೇಶಕ್ಕೆ ಒಂದೇ ಭಾಷೆ, ಆಚರಣೆ ಇರಬೇಕಾಗಿಲ್ಲ. ತಮಿಳರು, ಕನ್ನಡಿಗರು, ಗುಜರಾತಿಗಳೆಲ್ಲ ಒಟ್ಟಿಗೆ ಹೋರಾಡಿ ಸ್ವಾತಂತ್ರ್ಯ ಪಡೆದರು. ಆ ಭಾವನೆಯನ್ನು ಗಾಂಧೀಜಿ ಒಗ್ಗೂಡಿಸಿದ್ದರು’ ಎಂದರು.