ಚಿಕ್ಕೋಡಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.ತರಗತಿಗಳಿಲ್ಲದೆ ಸಮುದಾಯ ಭವನ, ದೇವಸ್ಥಾನ, ಮರದಡಿ ಮಕ್ಕಳು ಕುಳಿತು ಕಲಿಯುತ್ತಿದ್ದಾರೆ. ಕೆಲವೆಡೆ ಮನೆಗಳಲ್ಲೇ ಬಾಡಿಗೆ ಆಧಾರದ ಮೇಲೆ ಶಾಲೆಗಳು ನಡೆಯುತ್ತಿದ್ದಾರೆ.ಕನ್ನಡ, ಮರಾಠಿ, ಉರ್ದು ಮಾಧ್ಯಮವೂ ಸೇರಿದಂತೆ 7,31,164 ಪಠ್ಯ ಪುಸ್ತಕಗಳು ನೀರು ಪಾಲಾಗಿವೆ. ಓದಲು ಪುಸ್ತಕಗಳಿಲ್ಲ, ಬರೆಯಲು ಕಾಪಿಗಳಿಲ್ಲ. ಆದರೂ ಅರ್ಧ ವಾರ್ಷಿಕ ಪರೀಕ್ಷೆಗಳನ್ನೂ ಬರೆದಿದ್ದಾರೆ.