‘ಪ್ರತಿ ದಿನ ಸಂಜೆ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಹಸ ಚಟುವಟಿಕೆಗಳು ನಡೆಯಲಿವೆ. 45 ಸ್ಟಾಲ್ಗಳನ್ನು ಸ್ಥಾಪಿಸಲಾಗಿದ್ದು ವಿವಿಧ ಕೌಶಲ ತರಬೇತಿ ನೀಡಲಾಗುವುದು. ವಿವಿಧ ಧರ್ಮಗಳ ವಿಚಾರಗಳ ಬಗ್ಗೆ ಪರಿಚಯ, ಸರ್ವಧರ್ಮ ಸಮ್ಮೇಳನ ನಡೆಯಲಿದೆ. 25 ಸಾವಿರ ಬೀಜದ ಉಂಡೆಗಳ ತಯಾರಿಕೆ ನಡೆಯಲಿದೆ. ಬೆಸೆಂಟ್ ಪಾರ್ಕ್ನಲ್ಲಿ ಮಳೆ ನೀರು ಇಂಗು ಗುಂಡಿಗಳನ್ನು ತೋಡಲಾಗುವುದು. ಮಾಕಳಿ ದುರ್ಗದಲ್ಲಿ ಚಾರಣ ನಡೆಯಲಿದೆ. ಈ ಬಾರಿಯ ಜಾಂಬೋರೇಟ್ಗೆ ಬೆಂಗಳೂರು ಉತ್ತರ ಜಿಲ್ಲಾ ಸಂಸ್ಥೆ ಆತಿಥ್ಯ ವಹಿಸಿದೆ’ ಎಂದರು.