ಮಂಗಳೂರಿನ ನೇತ್ರಾವತಿ ನದಿ ಸೇತುವೆ ಬಳಿ ಸೋಮವಾರ ರಾತ್ರಿ ನಿಗೂಢವಾಗಿ ಕಾಣೆಯಾಗಿರುವ ಮಾಜಿ ಸಿ.ಎಂ ಎಸ್.ಎಂ ಕೃಷ್ಣ ಅಳಿಯ ವಿ.ಜಿ ಸಿದ್ದಾರ್ಥ ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮಂಗಳೂರುಪೊಲೀಸ್ ಅಧಿಕಾರಿಗಳು ಸೇತುವೆ ಬಳಿಯಲ್ಲೇ ಇದ್ದು ಪತ್ತೆ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಶಾಸಕರಾದ ಯು.ಟಿ ಖಾದರ್, ಟಿ.ಡಿ.ರಾಜೇಗೌಡ ಅವರೂ ಸ್ಥಳಕ್ಕೆ ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ದೋಣಿ, ಈಜುಗಾರರ ನೆರವಿನೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ. ಇತ್ತ ಬೆಂಗಳೂರಿನ ಎಸ್.ಎಂ ಕೃಷ್ಣ ನಿವಾಸಕ್ಕೆ ಕುಟುಂಬಸ್ಥರು, ಗಣ್ಯರು ಆಗಮಿಸುತ್ತಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಈ ಎಲ್ಲ ಘಟನಾವಳಿಯ ಚಿತ್ರಗಳು ಇಲ್ಲಿವೆ.