ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS| ದೋಣಿ, ಈಜುಗಾರರ ನೆರವಿನೊಂದಿಗೆ ಸಿದ್ದಾರ್ಥ್‌ಗಾಗಿ ಶೋಧ

Last Updated 30 ಜುಲೈ 2019, 3:59 IST
ಅಕ್ಷರ ಗಾತ್ರ

ಮಂಗಳೂರಿನ ನೇತ್ರಾವತಿ ನದಿ ಸೇತುವೆ ಬಳಿ ಸೋಮವಾರ ರಾತ್ರಿ ನಿಗೂಢವಾಗಿ ಕಾಣೆಯಾಗಿರುವ ಮಾಜಿ ಸಿ.ಎಂ ಎಸ್‌.ಎಂ ಕೃಷ್ಣ ಅಳಿಯ ವಿ.ಜಿ ಸಿದ್ದಾರ್ಥ ಅವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮಂಗಳೂರುಪೊಲೀಸ್‌ ಅಧಿಕಾರಿಗಳು ಸೇತುವೆ ಬಳಿಯಲ್ಲೇ ಇದ್ದು ಪತ್ತೆ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ಶಾಸಕರಾದ ಯು.ಟಿ ಖಾದರ್‌, ಟಿ.ಡಿ.ರಾಜೇಗೌಡ ಅವರೂ ಸ್ಥಳಕ್ಕೆ ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ದೋಣಿ, ಈಜುಗಾರರ ನೆರವಿನೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ. ಇತ್ತ ಬೆಂಗಳೂರಿನ ಎಸ್‌.ಎಂ ಕೃಷ್ಣ ನಿವಾಸಕ್ಕೆ ಕುಟುಂಬಸ್ಥರು, ಗಣ್ಯರು ಆಗಮಿಸುತ್ತಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಈ ಎಲ್ಲ ಘಟನಾವಳಿಯ ಚಿತ್ರಗಳು ಇಲ್ಲಿವೆ.

ಶಾಸಕ ಯು.ಟಿ ಖಾದರ್‌, ರಾಜೇಗೌಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು.
ಶಾಸಕ ಯು.ಟಿ ಖಾದರ್‌, ರಾಜೇಗೌಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು.
ಬೆಂಗಳೂರಿನಲ್ಲಿರುವ ಎಸ್‌.ಎಂ ಕೃಷ್ಣ ಅವರ ನಿವಾಸದ ಬಳಿ ಸೇರಿರುವ ಜನ
ಬೆಂಗಳೂರಿನಲ್ಲಿರುವ ಎಸ್‌.ಎಂ ಕೃಷ್ಣ ಅವರ ನಿವಾಸದ ಬಳಿ ಸೇರಿರುವ ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT