‘ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಘಟಕದ ಅಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಅವರು ಈ ವರ್ಷ ಒಂದು ಕೋಟಿ ಬೀಜದುಂಡೆ ಸಿದ್ಧಪಡಿಸಿ, ಗಿಡ ಬೆಳೆಸಬೇಕು ಎಂದು ಹೇಳಿದ್ದರು. ಅವರ ಮಾತಿನಿಂದ ಪ್ರೇರಿತನಾಗಿ, ಮಕ್ಕಳ ಬಳಿ, ತಿನ್ನುವ ಹಣ್ಣಿನ ಬೀಜಗಳನ್ನು ಎಸೆಯುವ ಬದಲಾಗಿ, ಡಬ್ಬದಲ್ಲಿ ಸೇರಿಸಿಡುವಂತೆ ಹೇಳಿದ್ದೆ. ಮಕ್ಕಳೇ ಉತ್ಸಾಹದಿಂದ ಮಣ್ಣು, ಗೊಬ್ಬರ ಕಲಸಿ, ಅದರೊಳಗೆ ಹಾಕಿರುವ ಬೀಜ ಈಗ ಮೊಳಕೆಯೊಡೆದಿದೆ. ಮುಂಗಾರು ಚುರುಕಾದ ಮೇಲೆ, ಇವುಗಳ ಬಿತ್ತನೆ ಮಾಡಲಾಗುತ್ತದೆ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಘಟಕದ ಕಾರ್ಯದರ್ಶಿಯೂ ಆಗಿರುವ ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.