ಈ ಹುದ್ದೆಯ ಆಯ್ಕೆಗೆ ಬುಧವಾರ ಮತದಾನ ನಿಗದಿಯಾಗಿದ್ದು, ಜೆಡಿಎಸ್ನ ಎಸ್.ಎಲ್. ಧರ್ಮೇಗೌಡ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಅವರೊಬ್ಬರೇ ಕಣದಲ್ಲಿರುವುದರಿಂದ ಅವಿರೋಧ ಆಯ್ಕೆ ಬಹುತೇಕ ಖಚಿತ. ಉಪ ಸಭಾಪತಿ ಹುದ್ದೆ ಜೆಡಿಎಸ್ಗೆ ಮೀಸಲಾಗಿತ್ತು. ಈ ಹುದ್ದೆಗಾಗಿ ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಮಧ್ಯೆ ತೀವ್ರ ಪೈಪೋಟಿ ಇತ್ತು. ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸುವ ಡಿ.ಸಿ. ತಮ್ಮಣ್ಣ ಹಾಗೂ ಸಿ.ಎಸ್. ಪುಟ್ಟರಾಜು ಇಬ್ಬರು ಸಚಿವರಾಗಿದ್ದಾರೆ. ಮತ್ತೊಂದು ಸ್ಥಾನವನ್ನು ಈ ಜಿಲ್ಲೆಗೆ ನೀಡುವುದು ಬೇಡ ಎಂಬ ಕಾರಣಕ್ಕೆ ಧರ್ಮೇಗೌಡ ಹೆಸರು ಮುಂಚೂಣಿಗೆ ಬಂದಿತು ಎನ್ನಲಾಗಿದೆ.