‘ಪಟ್ಟಭದ್ರರು ಧರ್ಮವನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಲಿಂಗಾಯಿತ ಧರ್ಮವು ವಿಶ್ವಧರ್ಮವಾಗಿದೆ. ಈ ಮೊದಲು ಇದ್ದ ಶೈವ ಪಂಥವು ವೀರಶೈವ ಪಂಥವಾಗಿ ರೂಪುಗೊಂಡಿತು. ನಂತರ ಇದು ಪರಿಷ್ಕರಣೆಗೊಂಡು 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಬಸವಪಂಥದ ಲಿಂಗಾಯತ ಧರ್ಮವಾಗಿ ರೂಪುಗೊಂಡಿತು. ವಿಗ್ರಹಾರಾಧನೆಯನ್ನು ಬಸವಣ್ಣ ವಿರೋಧಿಸಿದರು. ಇಂತಹ ವಿಶ್ವಧರ್ಮಕ್ಕೆ ಒಂದು ಮಾನ್ಯತೆ ಕಲ್ಪಿಸಲು ಹೊರಟಾಗ (ಹಿಂದಿನ ಸರ್ಕಾರ) ಇದೇಪಟ್ಟಭದ್ರ ಹಿತಾಶಕ್ತಿಗಳು ಇದರ ವಿರುದ್ಧ ಧ್ವನಿಎತ್ತಿ ಧಮನಮಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.