ಮೂಲವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಫಲ, ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಮಠದೊಳಗೆ ಹಾಗೂ ಮಠದ ಪ್ರಾಕಾರದಲ್ಲಿ ಭಕ್ತಸಮೂಹವು ಕುಳಿತು ಅಭಿಷೇಕ ನೆರವೇರಿಸುವ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡರು. ಸುವರ್ಣ ರಥದಲ್ಲಿ ರಾಯರ ಪ್ರಭಾವಳಿಯನ್ನಿರಿಸಿ ಪ್ರಾಕಾರದಲ್ಲಿ ರಥೋತ್ಸವ ನಡೆಸಲಾಯಿತು. ಚಂಡಿ, ಮದ್ದಳೆ ವಾದ್ಯ ವೈಭವವು ಆರಾಧನಾ ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಿವೆ.