ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿಯವರ ವಿಶ್ವಮಾನವತ್ವ, ಶಿಕ್ಷಣ ಪ್ರೇಮ, ಜನಪರ ಕಾಳಜಿ, ಕಾಯಕ ಪ್ರಜ್ಞೆ ಗುಣಗಳನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುತ್ತೂರುಶ್ರೀ, ಪೇಜಾವರಶ್ರೀ, ಶಿವಮೂರ್ತಿ ಮುರುಘಾಶರಣರು, ಉಜ್ಜಯಿನಿಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಸ್ಮರಿಸಿದರು.