ಅದರಲ್ಲಿಯೂ ಮಠದ ಅಂಧರ ಶಾಲೆಯ ಮಕ್ಕಳು ನಡೆಸಿಕೊಟ್ಟ ಭಜನೆ ಎಲ್ಲರ ಗಮನ ಸೆಳೆಯಿತು. ‘ಶಿವಕುಮಾರ ಪ್ರಭುವೇ, ಬಡವರಿಗೆ ಬೆಳಕು ನೀಡಿದ ಗುರುವೇ’ ಎಂದು ಹಾಡಿದಾಗ ವೇದಿಕೆಯಲ್ಲಿದ್ದವರು ಮಠಾಧೀಶರು ಭಾವುಕರಾದರು. ಈ ಮಕ್ಕಳು ಸೋಮವಾರ ನಡುರಾತ್ರಿಯ ಕೊರೆಯುವ ಚಳಿಯಲ್ಲಿಯೇ ಭಜನೆ ಆರಂಭಿಸಿದ್ದರು. ಹಿರಿಯ ಕಲಾವಿದ ಲಕ್ಷ್ಮಣದಾಸ್ ಶಿವಕುಮಾರ ಸ್ವಾಮೀಜಿ ಅವರ ಕುರಿತು ಹರಿಕಥೆ ನಡೆಸಿಕೊಟ್ಟರು.