ಸಮಾಧಿಗೆ ವಿಭೂತಿ: ಭವನದ ಗರ್ಭಗುಡಿಯಲ್ಲಿ ಮಂಗಳವಾರ ಬೆಳಗಿನಿಂದಲೇ ಪೂಜಾ ವಿಧಿವಿಧಾನಗಳು ನಡೆಯಲಿವೆ. ಸ್ಥಳಶುದ್ಧಿ, ಪಂಚಕಳಸ ಪೂಜೆ, ಅಷ್ಟ ದಿಕ್ಪಾಲಕರು ಹಾಗೂ ಸಪ್ತರ್ಷಿಗಳ ಪೂಜೆಗಳು ನಡೆಯಲಿವೆ. ಸಮಾಧಿಗೆ ವಿಭೂತಿ ಗಟ್ಟಿ ಹಾಗೂ ಉಪ್ಪನ್ನು ಬಳಸಲಾಗುತ್ತದೆ ಎಂದು ಸಿದ್ಧಗಂಗಾ ಮಠದ ಅರ್ಚಕ ಎಂ.ಎನ್.ಚಂದ್ರಶೇಖರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.