ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಸ್ವಾಮೀಜಿ ಜ.21ರಂದು ಶಿವೈಕ್ಯರಾದರು. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳ 21ರಂದು ಮಠದಲ್ಲಿ ಪುಣ್ಯ ಸ್ಮರಣೆ ಹಮ್ಮಿಕೊಳ್ಳಲಾಗುವುದು. ವಿವಿಧ ಗ್ರಾಮಗಳ ಜನರು ಈ ಕಾರ್ಯಕ್ರಮ ನಡೆಸಿಕೊಡುವರು. ಒಂದು ವರ್ಷ ಈ ರೀತಿ ಸ್ಮರಣೆ ನಡೆಯಲಿದೆ’ ಎಂದು ತಿಳಿಸಿದರು. ನೆಲಮಂಗಲ ತಾಲ್ಲೂಕಿನ ಬೂದಕೋಟೆ ಗ್ರಾಮಸ್ಥರು ಈ ಸಲದ ಪುಣ್ಯ ಸ್ಮರಣೆ ಜವಾಬ್ದಾರಿ ನಿರ್ವಹಿಸಿದರು.