ವಿಜಯದಶಮಿ ದಶಮಂಟಪ ಶೋಭಾಯಾತ್ರೆ ಅಂಗವಾಗಿ ನಗರದ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಕಾವೇರಿ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಹಾಗೂ ಅಕ್ರಂ ಅವರು ಬಾರ್ಗೆ ಬಿಡುವಿದ್ದ ಕಾರಣ ಅದೇ ಕಟ್ಟಡದ ಮೇಲಂತಸ್ತಿನಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಿದ್ದರು. ಪಾರ್ಟಿಗೆ ಕ್ಯಾಂಟೀನ್ನಿಂದ ಎಗ್ರೋಲ್, ಚಿಕನ್ ರೋಲ್ ಪಡೆದು ಹಣ ಪಾವತಿಸದೆ ತೆರಳಿದ್ದರು. ಮತ್ತೆ ಕ್ಯಾಂಟೀನ್ಗೆ ಬಂದ ಅಕ್ರಂ ಎಂಬಾತ ಗೋಬಿ ಮಂಚೂರಿ ನೀಡುವಂತೆ ಕೇಳಿದ್ದಾನೆ. ಮೊದಲು ಕೊಂಡೊಯ್ದ ಎಗ್ರೋಲ್ನ ಹಣ ಪಾವತಿಸುವಂತೆ ಮಾಲೀಕರು ಹೇಳಿದ್ದಾರೆ. ಆಗ ವಾಗ್ವಾದ ನಡೆದಿದೆ. ಅದನ್ನು ಕಟ್ಟಡದ ಮೇಲಿಂದ ಗಮನಿಸಿದ ಲೋಕೇಶ್, ಕ್ಯಾಂಟೀನ್ ಮಾಲೀಕರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.