ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಸಹಾಯಕ ಸಂರಕ್ಷಕ ಕಾಮತ್ ಅವರು ಇದಕ್ಕೆ ಪ್ರತಿಕ್ರಿಯಿಸಿ, ‘ಚಿಕ್ಕಬೆಟ್ಟದ ಚಂದ್ರಗಿರಿಯ ಪಾರ್ಶ್ವನಾಥ, ಚಂದ್ರಗುಪ್ತ, ಚಾವುಂಡರಾಯ ಬಸದಿಗಳು ಮತ್ತು ಪಟ್ಟಣದ ಅಕ್ಕನ ಬಸದಿಗಳು ಮತ್ತು ವಿಂಧ್ಯಗಿರಿಯ ಬಾಹುಬಲಿ ಸ್ವಾಮಿಯ ಪ್ರದೇಶ ಮಾತ್ರ ನಮ್ಮ ವ್ಯಾಪ್ತಿಗೆ ಒಳಪಟ್ಟಿದೆ. ಬೋಳುಬೆಟ್ಟ ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ಹೇಳಿದರು.