ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌ ಸರ್ಜಾ ವಿಚಾರದಲ್ಲಿ ಶ್ರುತಿ ಹರಿಹರನ್ ಮಾಡಿದ್ದು ತಪ್ಪು: ನಟ ಜಗ್ಗೇಶ್‌

Last Updated 23 ಅಕ್ಟೋಬರ್ 2018, 13:59 IST
ಅಕ್ಷರ ಗಾತ್ರ

ಬೆಂಗಳೂರು: ಸರಳತೆ ಮೈಗೂಡಿಸಿಕೊಂಡಿರುವ ಅರ್ಜುನ್‌ ಸರ್ಜಾ ವಿರುದ್ಧ ಆರೋಪ ಮಾಡುವ ಮೊದಲು ಶ್ರುತಿ ಹರಿಹರನ್‌ ಒಮ್ಮೆ ಯೋಚನೆ ಮಾಡಬೇಕಿತ್ತು ಎಂದು ಹಿರಿಯ ನಟ ಜಗ್ಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರುತಿ ಹರಿಹರನ್ ಅವರು ಮಾಡಿರುವ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಘಟನೆ ನಡೆದಾಗಲೇ ಶ್ರುತಿ ಪ್ರತಿಕ್ರಿಯೆ ನೀಡಬೇಕಿತ್ತು ಅಥವಾ ವಾಣಿಜ್ಯ ಮಂಡಳಿಗೆ ದೂರು ಕೊಡಬೇಕಾಗಿತ್ತು ಎಂದರು.ಸರಳತೆ ಮೈಗೂಡಿಸಿಕೊಂಡಿರುವ ಅರ್ಜುನ್‌ ಸರ್ಜಾ ಜಂಟಲ್‌ ಮ್ಯಾನ್ಈ ಆರೋಪ ಅವರನ್ನು ಕೊಲೆ ಮಾಡಿದಂತೆ ಎಂದು ಜಗ್ಗೇಶ್‌ ತಿಳಿಸಿದರು.

ಶ್ರುತಿ ಹರಿಹರನ್‌ ಪರವಾಗಿ ನಟ ಪ್ರಕಾಶ್ ರೈ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿರುವ ಪತ್ರಕ್ಕೆ ಜಗ್ಗೇಶ್‌ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಜುನ್‌ ಸರ್ಜಾ ಅವರೇನೂ ಸ್ಲಂನಿಂದ ಬಂದವರಲ್ಲ, ಅವರು ಸಂಸ್ಕಾರವಂತರೂ, 35 ವರ್ಷಗಳ ಕಾಲ ಚಿತ್ರೋದ್ಯಮದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ಕೆಲಸ ಮಾಡಿದ್ದಾರೆ ಎಂದು ಜಗ್ಗೇಶ್‌ ಹೇಳಿದರು.

ಇಂತಹ ಆರೋಪಗಳಿಂದ ಉದ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ, ಮುಂದೆ ಸಿನಿಮಾದವರು ಅಂದ್ರೆ ಯಾರು ಕೂಡ ಮನೆಯನ್ನು ಬಾಡಿಗೆಗೂ ಕೊಡುವುದಿಲ್ಲ, ಇದನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ಜಗ್ಗೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT