ತುಮಕೂರು: ಸಿದ್ಧಗಂಗಾ ಮಠದಲ್ಲಿಜ.31ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ಸಾಗಿವೆ.
ಭಕ್ತರು ದವಸ, ಧಾನ್ಯ ಮತ್ತು ತರಕಾರಿಗಳನ್ನು ಟ್ರಾಕ್ಟರ್, ಲಾರಿಗಳಲ್ಲಿ ತರುತ್ತಿದ್ದಾರೆ. ಮಂಗಳವಾರ ಚಿತ್ರದುರ್ಗ ಎಪಿಎಂಸಿ ವರ್ತಕರು, ಭಕ್ತರು 250 ಕ್ವಿಂಟಲ್ ಆಹಾರ ಸಾಮಗ್ರಿ ನೀಡಿದರು.
ಸಂಘಟಕರ ಪ್ರಕಾರ 3ರಿಂದ 4 ಲಕ್ಷ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. 10 ಕಡೆ ಒಮ್ಮೆ 10ರಿಂದ 15 ಸಾವಿರ ಜನರುಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ.