‘ಲೋಕಾಯುಕ್ತದ ಹಲ್ಲುಗಳನ್ನು ಕಿತ್ತು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚಿಸಿದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ನವರಿಗೆ ವೀರಶೈವ-ಲಿಂಗಾಯತ ಧರ್ಮ ಹಾಗೂ ಕಳಸಾ– ಬಂಡೂರಿ ವಿಷಯ ನೆನಪಿಗೆ ಬರುತ್ತದೆ. ಕಳಸಾ–ಬಂಡೂರಿ ಯೋಜನೆ ಕುರಿತು ಕೇಂದ್ರಕ್ಕೆ ಶಿಪಾರಸು ಮಾಡಿದ್ದರೆ, ಪತ್ರ ಬಹಿರಂಗಪಡಿಸಿ’ ಎಂದು ಸವಾಲು ಹಾಕಿದರು.