ಜತೆಗೆ, ಸರಣಿಟ್ವೀಟ್ ಮೂಲಕ ಬಿಜೆಪಿ ಮತ್ತು ಎನ್ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾಮಾಡಿ, ಮಹದಾಯಿ ವಿವಾದ ಬಗೆಹರಿಸಿ, ತಾರತಮ್ಯಮಾಡದೆ ನಮಗೆ ಬರಪರಿಹಾರ ನೀಡಿ ಎಂದೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡೆವು. ಯಾವುದನ್ನೂ ಮಾಡಲಿಲ್ಲ. ಆಗ ಲೋಕಸಭಾ ಸದಸ್ಯರಾಗಿದ್ದ ಯಡಿಯೂರಪ್ಪನವರೇ, ನೀವೇನು ಮಾಡಿದ್ದೀರಿ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರೈತರ ಬೆಳೆಯ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭ ಬರುವಂತಹ ಬೆಂಬಲ ಬೆಲೆ ನೀಡುವುದಾಗಿ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿತ್ತಲ್ಲವೇ? ಯಾವ ರೈತರಿಗೆ ಆ ಬೆಲೆ ಸಿಕ್ಕಿದೆ 'ರೈತನಾಯಕ' ಯಡಿಯೂರಪ್ಪನವರೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.