ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯನವರು ಅಹಿಂದ ಮಂತ್ರ ಜಪಿಸುತ್ತಾರೆ. ಆದರೆ, ಇಡೀ ರಾಜ್ಯದಲ್ಲಿ ಕುರುಬ ನಾಯಕರನ್ನು ತುಳಿದರು. ಅವರು ಯಾರಿಗೆಲ್ಲ ಮೋಸ ಮಾಡಿದ್ದಾರೆ ಎನ್ನುವುದು ಕುರುಬರಿಗೆ ಗೊತ್ತಿದೆ. ಅವರೇನೂ ದಡ್ಡರಲ್ಲ’ ಎಂದು ಹೇಳಿದರು.