ಲಿಂಗಾಯತ ಅಭ್ಯರ್ಥಿಗೆ ಮತ ಹಾಕುವಂತೆ ಲೋಕಸಭಾ ಚುನಾವಣೆಯಲ್ಲಿ ಜಾತಿ ರಾಜಕೀಯ ಮಾಡಲಾಯಿತು, ಈಗ ಕುಂದಗೋಳದಲ್ಲಿ ಲಿಂಗಾಯತ ಅಭ್ಯರ್ಥಿ ಪರ ಮತ ಕೇಳುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಯಾರೂ ಜಾತಿ ರಾಜಕಾರಣ ಮಾಡಿಲ್ಲ. ಬರೀ ಜಾತಿಯ ಮೇಲೆಯೇ ಮತ ಕೇಳಲು ಆಗದು. ಜನರು ಸಹ ಜಾತಿ ನೋಡಿಕೊಂಡೇ ಮತ ಹಾಕುವುದಿಲ್ಲ’ ಎಂದರು.