ಜನಾರ್ದನರೆಡ್ಡಿ, ದೇವಿ ಎಂಟರ್ಪ್ರೈಸಸ್ನ ಕೆ.ಎಂ.ಆಲಿಖಾನ್ ಹಾಗೂ ಶ್ರೀ ಮಿನರಲ್ಸ್ನ ಬಿ.ವಿ.ಶ್ರೀನಿವಾಸರೆಡ್ಡಿ ಮೂವರು ಸೇರಿ ಒಳಸಂಚು ಮಾಡಿ ಶೇಖ್ಸಾಬ್ ಅವರಿಗೆ ಸೇರಿದ ಗಣಿ ಪ್ರದೇಶದಿಂದ ಬಲವಂತವಾಗಿ 1,69,263 ಟನ್ ಅದಿರನ್ನು ಅಕ್ರಮವಾಗಿ ತೆಗೆದು, ಪರವಾನಗಿ ಪಡೆಯದೆ ಪಾಪಿನಾಯಕನಹಳ್ಳಿಯ ಖಾಸಗಿ ಸ್ಥಳಕ್ಕೆ ಸಾಗಿಸಿದ್ದರು. ಇದನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.