ಎಮ್ಮೆಮಾಡು ಗ್ರಾಮದ ಗಫೂರ್ ದುಬೈನಲ್ಲಿ ನೆಲೆಸಿದ್ದು, ಇತ್ತೀಚೆಗೆ ಹೊಸ ಮನೆ ನಿರ್ಮಾಣಕ್ಕೆಂದು ಊರಿಗೆ ಬಂದಿದ್ದರು. ಅವರ ಬಳಿ ಮನೆ ನಿರ್ಮಾಣದ ಹಣವಿರುವ ಮಾಹಿತಿ ತಿಳಿದ 10 ಮಂದಿ ಆರೋಪಿಗಳು, ದರೋಡೆಗೆ ಸಂಚು ರೂಪಿಸಿದ್ದರು. ಎಲೆಕ್ಟ್ರಾನಿಕ್ ಉಪಕರಣ ಕೊಡಿಸುವ ನೆಪದಲ್ಲಿ ಮೈಸೂರಿಗೆ ಕರೆದೊಯ್ಯುವ ಯೋಜನೆ ರೂಪಿಸಿ, ಆಗಸ್ಟ್ 16ರಂದು ಕರೀಂ ಹಾಗೂ ಅಜರುದ್ದೀನ್ ಮೈಸೂರಿಗೆ ಕಾರಿನಲ್ಲಿ ಕರೆದೊಯ್ಯುವಾಗ ವಿದ್ಯಾರ್ಥಿನಿಯನ್ನು ಹತ್ತಿಸಿಕೊಂಡಿದ್ದರು. ಮೈಸೂರಿನ ರಿಂಗ್ ರಸ್ತೆ ಸಮೀಪ ಹೋಮ್ ಸ್ಟೇಗೆ ಗಫೂರ್ ಹಾಗೂ ವಿದ್ಯಾರ್ಥಿನಿಯನ್ನು ಕರೆದೊಯ್ದು ಗಫೂರ್ಗೆ ಅಮಲು ಪದಾರ್ಥ ನೀಡಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
‘ಹೋಮ್ ಸ್ಟೇಗೆ ಉಳಿದ ಆರೋಪಿಗಳು ಪತ್ರಕರ್ತರೆಂದು ಹೇಳಿಕೊಂಡು ಪ್ರವೇಶಿಸಿ ಗಫೂರ್ಗೆ ಥಳಿಸಿ, ₹ 60 ಸಾವಿರ ನಗದು, 55 ಸಾವಿರ ಮೌಲ್ಯದ ವಿದೇಶಿ ಕರೆನ್ಸಿ ಕಸಿದುಕೊಂಡಿದ್ದರು. ಬಳಿಕ ಬೆದರಿಸಿ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲ ವಿಡಿಯೊ ಚಿತ್ರೀಕರಿಸಿದ್ದರು. ₹ 50 ಲಕ್ಷ ನೀಡದಿದ್ದರೆ ವಾಹಿನಿಗಳಲ್ಲಿ ಈ ದೃಶ್ಯ ಪ್ರಸಾರ ಮಾಡುವ ಬೆದರಿಕೆಯೊಡ್ಡಿದ್ದರು. ಹೆದರಿದ ಗಫೂರ್, ಸಂಬಂಧಿಕರಿಂದ ₹ 3.80 ಲಕ್ಷ ತರಿಸಿ ಆರೋಪಿಗಳಿಗೆ ನೀಡಿದ್ದರು. ಬಳಿಕ ಗಫೂರ್ನನ್ನು ಬಿಟ್ಟು ಕಳುಹಿಸಿದ್ದರು’ ಎಂದು ಸುಮನ್ ಮಾಹಿತಿ ನೀಡಿದರು.
ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.