ಸ್ವರ್ಣವಲ್ಲಿ ಸ್ವಾಮೀಜಿ ಮಾತನಾಡಿ, ‘ಭಾರತದಲ್ಲಿ ರಾಜರ ಇತಿಹಾಸಕ್ಕೆ ಸಿಕ್ಕಿದ ಮಹತ್ವ ಅಧ್ಯಾತ್ಮ ಸಾಧಕರು, ಪ್ರಾಚೀನ ವಿಜ್ಞಾನಿಗಳು, ಐತಿಹಾಸಿಕ ಕಲಾವಿದರಿಗೂ ಸಿಗಬೇಕು. ಆಧ್ಯಾತ್ಮಿಕ ಸಾಧಕರ ಚರಿತ್ರೆ ವಿವರವಾಗಿ ಲಭ್ಯವಾಗಬೇಕು. ಸಾಮ್ರಾಜ್ಯ ಸ್ಥಾಪಕರ ಇತಿಹಾಸದಂತೆ, ಪರಂಪರೆಗೆ ಕೊಡುಗೆ ನೀಡಿದವರ ಹೆಸರು ಚಿರಸ್ಥಾಯಿಯಾಗಬೇಕು’ ಎಂದರು.