ಮಾಲ್ದಾರ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲೂ ಸೌರಬೇಲಿ ಅಳವಡಿಸಿದ್ದು, ಅಲ್ಲಿಯೂ ತಂತಿ ಬೇಲಿಗಳು ತುಂಡಾಗಿವೆ. ಮೈಸೂರಿನ ಗುತ್ತಿಗೆದಾರರ ಅಂಬರೀಷ್ ಎಂಬುವರು ಸೌರಬೇಲಿ ಅಳವಡಿಕೆ ಕಾಮಗಾರಿ ನಡೆಸಿದ್ದು, ಯೋಜನೆ ಪ್ರಕಾರ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕಳಪೆ ಗುಣಮಟ್ಟದ ತಂತಿಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ ಮಾಜಿ ಸದಸ್ಯ ಆರ್.ಕೆ.ಚಂದ್ರು ಒತ್ತಾಯಿಸಿದ್ದಾರೆ.