‘ದೇಶದ್ರೋಹದ ಹೇಳಿಕೆ ನೀಡಿರುವ ಅಮೂಲ್ಯಾ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಕೊಡಬಾರದು. ಒಂದುವೇಳೆ ಬಿಡುಗಡೆ ಮಾಡಿದರೆ ನಾವೇ ಎನ್ಕೌಂಟರ್ ಮಾಡುತ್ತೇವೆ. ಎನ್ಕೌಂಟರ್ ಮಾಡಿದವರಿಗೆ ₹10 ಲಕ್ಷ ಬಹುಮಾನ ಕೊಡುತ್ತೇವೆ’ ಎಂದು ಆವೇಶ ಭರಿತರಾಗಿ ಹೇಳಿದರು. ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಎಡೆಮಾಡಿಕೊಟ್ಟಿದೆ.