ಹೀಗೆ, ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಪ್ರಶ್ನೆ ಪತ್ರಿಕೆ ಪುಟ ಹರಿ ಬಿಟ್ಟವರು ಶಿರಾ ತಾಲ್ಲೂಕು ಬಂದಕುಂಟೆ ಮಣ್ಣಮ್ಮ ಶಾಲೆಯ ಶಿಕ್ಷಕ ಎಸ್.ಕಾಂತರಾಜ್. ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಅವರನ್ನು ಶಿರಾ ತಾಲ್ಲೂಕು ಹೊಸೂರು ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ ಅಧಿಕಾರಿಯಾಗಿ ಶಿಕ್ಷಣ ಇಲಾಖೆ ನೇಮಿಸಿತ್ತು. ಪರೀಕ್ಷೆ ಮೊದಲ ದಿನವೇ ಈ ಕೃತ್ಯ ಎಸಗಿದ್ದಾರೆ.