‘ಪರೀಕ್ಷಾ ಕಾರ್ಯದಲ್ಲಿ 60 ಸಾವಿರಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರು ಮತ್ತು ಇಲಾಖೆಯ ಇತರ ಸಿಬ್ಬಂದಿ ತೊಡಗಿದ್ದು, ಕೊರೊನಾ ಸೋಂಕಿನ ಭೀತಿ ಇವರಿಗೂ ಇದೆ. ಹೀಗಾಗಿ ಪರೀಕ್ಷೆ ಹಾಗೂ ಮುಂದೆ ಮೌಲ್ಯಮಾಪನ ಕೆಲಸದಲ್ಲಿ ತೊಡಗಲಿರುವ ಎಲ್ಲ ಸಿಬ್ಬಂದಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿಯಲ್ಲಿ ₹ 1 ಕೋಟಿಯ ವಿಮೆಗೆ ಒಳಪಡಿಸುವುದು ಹಾಗೂ ಸೋಂಕು ತಗುಲಿದರೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಒತ್ತಾಯಿಸಿದ್ದಾರೆ.