ಬೆಂಗಳೂರು: ಬಿಯರ್ ಹಾಗೂ ಆಲ್ಕೊಹಾಲ್ ಪ್ರಮಾಣ ಕಡಿಮೆ ಇರುವ ಪೇಯಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು.
ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಆಲ್ಕೊಹಾಲ್ ಪ್ರಮಾಣ ಕಡಿಮೆ ಇರುವ ಪೇಯಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಹಾಗೂ 2019–20 ಹಣಕಾಸು ವರ್ಷದಲ್ಲಿ ₹20,950 ಕೋಟಿ ವರಮಾನಸಂಗ್ರಹದ ಗುರಿ ಘೋಷಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ): ವಾಣಿಜ್ಯ ತೆರಿಗೆ ಇಲಾಖೆಗೆ ₹76,046 ಕೋಟಿ ವರಮಾನಸಂಗ್ರಹ ಗುರಿ ನಿಗದಿ ಪಡಿಸಲಾಗಿದೆ. ಜಿಎಸ್ಟಿ ಅಡಿಯಲ್ಲಿ ಆದಾಯ ಸರಿದೂಗದಿದ್ದರೆ, ಪರಿಹಾರ ಕಾಯ್ದೆಯಲ್ಲಿ ನಿಗದಿ ಪಡಿಸಿದಂತೆ ರಾಜ್ಯಗಳಿಗೆ 2025ರ ವರೆಗೂ ಪರಿಹಾರ ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ನಿರ್ಧರಿಸಿದೆ.
ಜಿಎಸ್ಟಿ ಜಾರಿಗಾಗಿ ಹಿಂದಿನ ತೆರಿಗೆ ಬಾಕಿ ಕಡಿತಗೊಳಿಸಲು ಸಮಗ್ರ ಕರ ಸಮಾಧಾನ ಯೋಜನೆ ಜಾರಿಗೊಳಿಸಲಾಗಿದೆ.