ಬೆಂಗಳೂರು: ಈಗಿರುವುದು ಸಮನ್ವಯ ಸಮಿತಿ ಅಲ್ಲ ಸಿದ್ದರಾಮಯ್ಯ ಸಮಿತಿ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮಾಧ್ಯಮ ಪ್ರತಿನಧಿಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಇಲ್ಲದ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದರು.
ಎರಡು ಪಕ್ಷಗಳ ಸಮನ್ವಯಕ್ಕಾಗಿ ಸಮಿತಿ ರಚಿಸಲಾಗಿದೆ. ವಿಶ್ವನಾಥ್ ಸೇರ್ಪಡೆ ಇಷ್ಟವಿಲ್ಲ ಎನ್ನುವ ಅಧಿಕಾರ ಯಾರಿಗೂ ಇಲ್ಲ. ಕಾಮನ್ ಮಿನಿಮಮ್ ಪ್ರೋಗ್ರಾಂ ಎಲ್ಲಿದೆ? ಅದನ್ನು ಜಾರಿಗೊಳಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದರು.
ಮೈತ್ರಿ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕರು ಮಾತನಾಡಬಾರದು ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂಬ ಹೇಳಿಕೆ ಸಲ್ಲದು. ಕುಮಾರಸ್ವಾಮಿಯವರೇ ಐದು ವರ್ಷ ಆಡಳಿತ ಪೂರೈಸುತ್ತಾರೆ.
ಎರಡು ಪಾಲುದಾರ ಪಕ್ಷಗಳು ಸಮಿತಿಯಲ್ಲಿರಬೇಕು. ನಾನಾಗಲೀ, ದಿನೇಶ್ ಗುಂಡೂರಾವ್ ಆಗಲೀ ಸಮಿತಿಗೇ ಹೋಗಲು ಸಾಧ್ಯವಾಗಲೇ ಇಲ್ಲ. ಸಮನ್ವಯ ಸಮಿತಿ ಇರೋದು ವ್ಯಕ್ತಿಯೊಬ್ಬರ ಇಷ್ಟಕಷ್ಟಕ್ಕಲ್ಲ ಎಂದೂ ಹೇಳಿದರು.