ಬೆಂಗಳೂರು: ‘ಡ್ರೋನ್ ಕ್ಯಾಮೆರಾದಿಂದ ಕ್ವಾರಿಗಳ ಸಮೀಕ್ಷೆ ಮಾಡಿ ದಂಡ ವಿಧಿಸುವಿಕೆ ನಿಲ್ಲಿಸಬೇಕು. ಸರ್ಕಾರ ಸಂಗ್ರಹಿಸುವ ರಾಜಧನದಿಂದ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳಿರುವ ಪ್ರದೇಶಗಳಿಗೆ ರಸ್ತೆ ಸೌಲಭ್ಯ ಕಲ್ಪಿಸಬೇಕು’ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ಮತ್ತು ಉಪಾಧ್ಯಕ್ಷ ಸಿದ್ದರಾಜು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.