ರಾಯಚೂರು ತಾಲ್ಲೂಕಿನ ಗಣಮೂರು ಗ್ರಾಮದ 17 ವಯಸ್ಸಿನ ಈ ವಿದ್ಯಾರ್ಥಿನಿಯು ಎಸ್ಸೆಸ್ಸೆಲ್ಸಿ ನಂತರ ಅರೆವೈದ್ಯಕೀಯ ಕಲಿಯುತ್ತಿದ್ದರು. ಗ್ರಾಮದಿಂದ ನಿತ್ಯ ಕಾಲೇಜಿಗೆ ಬಂದು ಹೋಗುತ್ತಿದ್ದ ವಿದ್ಯಾರ್ಥಿನಿ ಆಗಸ್ಟ್ 16 ರಂದು ಮನೆಯಿಂದ ಹೊರಬಂದು, ವಾಪಸಾಗಿರಲಿಲ್ಲ. ಪಾಲಕರು ಎರಡು ದಿನ ಹುಡುಕಿದ ನಂತರ, ಅಸಹಾಯಕರಾಗಿ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದರು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆಯೂ ದೂರಿನಲ್ಲಿ ಹೇಳಿದ್ದರು.