ಸುಬ್ರಹ್ಮಣ್ಯ: ‘ಶ್ರೀಮಠದ ವಿರುದ್ಧ ಕೆಲವು ಸಮಯದಿಂದ ಕೆಲವರು ನಿರಂತರ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು, ಮಠ ಹಾಗೂ ಗೋಶಾಲೆಯ ಹಸುಗಳಿಗೆ ಸರಬರಾಜಾಗುತ್ತಿದ್ದ ನೀರು ಸ್ಥಗಿತಗೊಳಿಸಿರುವುದು ನನ್ನ ಮನಸ್ಸಿಗೆ ಅತೀವ ನೋವುಂಟು ಮಾಡಿದೆ. ಇದರಿಂದ ಬೇಸತ್ತು ಉಪವಾಸ ಆರಂಭಿಸಿದ್ದೇನೆ’ ಎಂದು ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಶ್ರೀಗಳು ತಿಳಿಸಿದ್ದಾರೆ.