‘ಮುಖ್ಯವಾಗಿ ಆರೋಗ್ಯ ಸೇವೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮಂಡಳಿಯು ಆದ್ಯತೆ ನೀಡುತ್ತಿದ್ದು, ಹೆಚ್ಚು ಅನುದಾನವನ್ನು ಈ ಎರಡು ಕ್ಷೇತ್ರಗಳಿಗೇ ಮೀಸಲಿಟ್ಟಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಮೂಲಕ ಆರು ಜಿಲ್ಲೆಗಳ ಮಕ್ಕಳ ಶೈಕ್ಷಣಿಕ ಮಟ್ಟವನ್ನು ವೃದ್ಧಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ನಂತರದ ಆದ್ಯತೆ ಮೂಲಸೌಕರ್ಯಕ್ಕೆ ನೀಡಲಾಗಿದೆ. ರಸ್ತೆಗಳು, ಕಾಲೇಜು ಕಟ್ಟಡ, ಕ್ರೀಡಾಂಗಣಗಳಿಗೆ ಕ್ರೀಡಾ ಪರಿಕರ ಒದಗಿಸುವುದಕ್ಕೂ ಆರ್ಥಿಕ ನೆರವು ನೀಡಲಾಗುತ್ತಿದೆ. ವೃತ್ತಿಪರ ತರಬೇತಿಗೆ ಆಯ್ದ ಜಿಲ್ಲೆಗಳಲ್ಲಿ ಅತ್ಯುನ್ನತ ಅಧ್ಯಯನ ಕೇಂದ್ರ ತೆರೆಯಲೂ ಮುಂದಾಗಿದ್ದೇವೆ’ ಎಂದರು.